ಅಕಾಡೆಮಿಗಳ ಕೆಲಸ
ಲೇಖಕರು : ಡಾ. ಎಂ. ಪ್ರಭಾಕರ ಜೋಶಿ
ಶನಿವಾರ, ಜನವರಿ 3 , 2015
|
ಜನವರಿ 2, 2015
|
ಅಕಾಡೆಮಿಗಳ ಕೆಲಸ
ರಾಜ್ಯದಲ್ಲಿ ಇರುವ ಸಾಂಸ್ಕೃತಿಕ ಕ್ಷೇತ್ರದ ಹಲವು ಅಕಾಡಮಿಗಳ ಕಾರ್ಯವಿಧಾನ ಮತ್ತು ಚಟುವಟಿಕೆಗಳು ಹಲವು ಬಾರಿ ತಪ್ಪು ಕಾರಣಗಳಿಗಾಗಿ ಚರ್ಚೆಯಾಗುತ್ತವೆ. ಇದಕ್ಕೆ ಸರಕಾರದ ಧೋರಣೆಗಳು, ಅಕಾಡಮಿಗಳು, ಅವುಗಳ ಕುರಿತು ಇರುವ ಜನಪ್ರಿಯ ಗ್ರಹಿಕೆಗಳು - ಎಲ್ಲವೂ ಕಾರಣ.
ಅಕಾಡಮಿಗಳ ಕೆಲಸವೆಂಬುದು ಮುಖ್ಯವಾಗಿ - ಅಕಾಡಮಿಕ್, ಶೈಕ್ಷಣಿಕ, ಅಧ್ಯಯನಾತ್ಮಕ, ಕಲಾ ಸಂರಕ್ಷಣ, ವರ್ಧನಗಳಿಗೆ ಬೌದ್ಧಿಕಕಾರ್ಯ. ಎರಡನೆಯದು ಪ್ರಶಸ್ತಿಗಳು ಮತ್ತು ಆಯ್ದ ಪ್ರದರ್ಶನಗಳಿಗೆ ಅವಕಾಶ. ಈ ಉದ್ದೇಶಗಳಿಗಾಗಿ ಸಂಸ್ಥೆಗಳ ಜತೆ ಸಹಯೋಗ ಸೂಕ್ತ ನಿಬಂಧನೆಗಳೊಂದಿಗೆ. ಆದರೆ ಹಲವು ಬಾರಿ ಇದು ನಡೆಯುವುದಿಲ್ಲ. ರಾಜನೀತಿ ಸಹಿತ ಹಲವು ಸಹಜ ಕಾರಣಗಳಿರುತ್ತವೆ.
ಆದರೆ ಕಲಾವಿದರಿಗೆ ನೆರವು ಕೊಡುವುದು (ಆಪತ್ಸಹಾಯ, ಬಡತನ ನಿವಾರಣೆಗೆ), ಬೇರೆ ಪ್ರಶಸ್ತಿಗಳಿಗೆ (ಅಕಾಡಮಿಯೇತರ) ವ್ಯವಸ್ಥೆ ಇವು ಅಕಾಡೆಮಿಗಳ ಕೆಲಸವಲ್ಲ. ಆ ವಿಚಾರದಲ್ಲಿ ಅಕಾಡಮಿಗಳಿಗಿರುವುದು ಸಲಹೆ ನೀಡುವ ಸಾಧ್ಯತೆ ಮಾತ್ರ. ಹಾಗಾಗಿ ಅಕಾಡಮಿಗಳು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಿಲ್ಲ ಎಂದು ತಿಳಿದವರೇ ಹೇಳುತ್ತಿರುವುದು ಅನುಚಿತ. ಅಕಾಡಮಿಗಳನ್ನು ಸರಕಾರ ಬದಲಾವಣೆಗೆ ಜೋಡಿಸಿ ಬದಲಿಸುವುದು ತಪ್ಪು. ಈ ಪ್ರಕ್ರಿಯೆಯ ಇತಿಹಾಸವು ಪರಿಶೀಲನಾರ್ಹ, ವಿಮಶಾìರ್ಹ.
ಆದರೆ ಅದರಿಂದಾಗಿ, ಹೊಸದಾಗಿ ನೇಮಕಗೊಂಡ ತಜ್ಞರ (ಉದಾ - ಯಕ್ಷಗಾನ ಅಕಾಡಮಿಯ ಡಾ| ಬೆಳಗಲ್ ವೀರಣ್ಣ) ಬಗೆಗೆ ಸಣ್ಣ ಮಾತು ಸಲ್ಲದು. ಅವರೂ ಸಮರ್ಥರು, ಕಲಾವಿದರು.
ಅಕಾಡಮಿಗಳು ತಾವೇನು, ತಾವೆಷ್ಟು ಎಂದು ಕಂಡುಕೊಂಡು ಕಾರ್ಯನಿರ್ವಹಿಸಬೇಕು, ಅವುಗಳಿಗೂ ದೊಡ್ಡ ಮಿತಿಗಳಿವೆ. ನೀಡಲಾದ "ಅನುದಾನ' ಬಹು ಅಲ್ಪ. ಆರು ಕೋಟಿ ಜನಸಂಖ್ಯೆಯ ಒಂದು ರಾಜ್ಯದ, ಸಾಂಸ್ಕೃತಿಕ ಅಕಾಡಮಿಯೊಂದು 50-60 ಲಕ್ಷ, 1 ಕೋಟಿ ಅನುದಾನದಲ್ಲಿ ಏನು ಮಾಡೀತು? ಅರ್ಧಾಂಶ ನಿತ್ಯವೆಚ್ಚ ಉಳಿದುದರಲ್ಲಿ - ಅಕಾಡಮಿಕ್ಸ್, ಪ್ರದರ್ಶನ, ಒತ್ತಡದ ಹಂಚುವಿಕೆ, ಪ್ರಾದೇಶಿಕ ನ್ಯಾಯ ಎಲ್ಲಾ ಆಗಬೇಕು.
ಯಕ್ಷಗಾನ ಅಕಾಡಮಿಯ ಮೂಲಕ ಯಕ್ಷಗಾನವನ್ನು ದೇಶ ಮತ್ತು ವಿಶ್ವಮಟ್ಟದಲ್ಲಿ ಮುಂದಿಡುವ -ಪ್ರೊಜೆಕ್ಟ್ ಮಾಡುವ -ಉದ್ದೇಶ ಇದ್ದರೆ ವರ್ಷಕ್ಕೆ ಕನಿಷ್ಠ ನೂರು ಕೋಟಿ ಅನುದಾನವನ್ನಾದರೂ ಕೊಡಲೇಬೇಕು.
ಸರಕಾರಕ್ಕೂ ತನ್ನ ಧೋರಣೆಗಳಿವೆಯಲ್ಲ?
ಕೃಪೆ :
http://udayavani.com
|
|
|